ಮಂಗಳವಾರ, ಜುಲೈ 14, 2015

  ಕಾಪಾಡು ಎಂದರೆ ಕೊಂದೇ ಬಿಟ್ಟ

ಕಾಪಾಡು.... ಎಂದು ದೇವರ ಬಳಿಗೆ ತೆರಳಿದ ಭಕ್ತರನ್ನ ಆ ನಿಷ್ಕರುಣಿ ದೇವ ಕೊಂದೇ ಬಿಟ್ಟ.... ದಕ್ಷಿಣದ ಕುಂಭಮೇಳ ಎಂದೇ ಹೆಸರು ಪಡೆದಿರುವ ಆಂಧ್ರದ ಪವಿತ್ರ ಗೋದಾವರಿ ಮಹಾಪುಷ್ಕರ ಮೇಳವು 144 ವರ್ಷದ ಬಳಿಕ ಇದೀಗ ಮತ್ತೆ ಬಂದಿದ್ದು, ರಾಜಮಂಡ್ರಿಯ ಪುಷ್ಕರ ಘಾಟ್ ನ ನದಿಯಲ್ಲಿ ಪುಣ್ಯ ಸ್ನಾನ ಮಾಡಲೆಂದು ಲಕ್ಷಾಂತರ ಜನರು ಸೇರಿದ್ದು, ಈ ಸಂದರ್ಭ ನೂಕು ನುಗ್ಗಲು ನಡೆದು ಸುಮಾರು 27ಕ್ಕೂ ಅಧಿಕ ಮಂದಿ ಸಾವನ್ನಪ್ಪಿ ದೇವರಿಂದ ವಂಚನೆಗೊಳಗಾಗಿದ್ದಾರೆ.
ಈ ಘಟನೆಯು ಸರಕಾರದ ಅಸಮರ್ಥ ಭದ್ರತೆಯಿಂದ ನಡೆದಿದೆ ಎನ್ನಲಾಗಿದ್ದು, ಸತ್ತಾಕ್ಷಣವೇ ಮೃತರಿಗೆ 10 ಲಕ್ಷ ಪರಿಹಾರ ಘೋಷಣೆ ಮಾಡಿ ತನ್ನ ಜವಾಬ್ದಾರಿಯನ್ನ ನಿಭಾಯಿಸಿದೆ. ಇದೇ ಹಣವನ್ನು ಸೂಕ್ತ ಭದ್ರತೆಗಾಗಿ ವಿನಿಯೋಗಿಸಿದ್ದರೆ  ಜನರ ಪ್ರಾಣವಾದರೂ ಉಳಿತಿತ್ತು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ